Friday, February 26, 2010

ಕತ್ತಲು ಬೆತ್ತಲು

ಸುತ್ತ ಮುತ್ತಕ್ಕು ಕಡುಗತ್ತಲು,
ಬೆಳಕ ಕಿಂಡಿ ಕಾಣದಿರಲು ದಿಗಿಲು,
ಅವನ ನೆಪಗಳ ನೆನಪುಗಳ ಮಧ್ಯೆ
ನಾ ಕಳೆದು ಹೋಗಲು,ಅವ ಬಿಟ್ಟ
ಈ ಮನ ಕತ್ತಲಲ್ಲಿ ಬೆತ್ತಲು

ನನ್ನವನು

ಹೃದಯದೊಳಗೆ ಅವಿತ ನಿನ್ನ,
ಊರೆಲ್ಲ ಹುಡುಕಿ, ನೀ ಕಾಣದಾಗ,
ಡವಗುಡುವ ಎದೆಯನ್ನೊಮ್ಮೆ
ಮುಟ್ಟಿ ನೋಡಿದರೆ, ನೀ ಕಿಲ್ಲನೆ
ನಗೆ ನಕ್ಕು ನನ್ನ ತಲೆ ಮೊಟಕಿದೆ!

ग़जल

बारिश को बस रोना आता है!
हँसाना नहीं,
सूरज को बस जलना आता है!
बुझाना नहीं,
मुझे बस याद करना आता है!
भुलाना नहीं

Monday, February 15, 2010

ಕನಸುಗಳಿಗೀಗ ಹಾರುವ ಕಾಲ!

ಹೃದಯದ ಮೆದುವಿನಲ್ಲಿ ಬಹುಕಾಲ
ಬೆಚ್ಚಗೆ ಬಚ್ಚಿಟ್ಟು ಕೊಂಡಿದ್ದ
ಕನಸುಗಳಿಗೀಗ ರೆಕ್ಕೆ ಬಂದಿದೆ!

ಕನ್ಮನದಲ್ಲೇ ನೆಲೆ ಕಾಣ ಹೊರಟಿದ್ದ
ಕನಸುಗಳಿಗೀಗ ಅಂಕೆ ಮೀರಿ ಮೇರು
ಗಗನವ ಚುಂಬಿಸುವ ತವಕ!

ಹೃದಯದ ಮೆದುವಿನ್ನು ಖಾಲಿ
ಖಾಲಿ, ಗರಿಗೆದರಿ ಹೊರಟಿರುವ
ಕನಸುಗಳು ಮರಳಿ ಬರುವವೇ ಮತ್ತೆ!

ಕನಸುಗಳಿಗೂ ಕನಸು ಕಾಣುವ
ಕಾಲವಿದು, ಕನಸುಗಳಿಗೆ ಇಂದು
ನೆನಸಾಗುವ ಕನಸಿನ ಕನವರಿಕೆ!

Thursday, February 11, 2010

ಮೊದಲ ಪಾಪ

ಅದೋ ಅಲ್ಲಿ ಹರಡಿವೆಯಲ್ಲ..........?
ಅವು ಮೊನ್ನೆ ನಾವೇ ತುಂಡರಿಸಿದ
ಹೆಮ್ಮರದ ಬಿಳಲುಗಳು........!

ಏನಾಶ್ಚರ್ಯ ಬಿದ್ದ ಬಿಳಲುಗಳು
ಅಲ್ಲಲ್ಲಿ ನೆಲಕಚ್ಚಿ ಚಿಗುರೊಡೆಯ
ತೊಡಗಿವೆಯಲ್ಲ...............!

ಕಾಲ ಚಕ್ರದ ಅಡಿಯಲ್ಲಿ ಸಿಕ್ಕಿ
ಮಡಿದ ಹೆಮ್ಮರಗಳ ಸಂಖ್ಯೆ
ಅದೆಷ್ಟೋ ಬಲ್ಲವರಾರು ?

ಋತು ಆಗಮನದ ಸಿಂಚನ
ಸಮ್ಮಿಲನದ ಫಲವಾಗಿ ಮತ್ತೆ
ಚಿಗುರೊಡೆಯುವ ಸಸಿಗಳೆಷ್ಟೋ ?

ಮಾವು, ಹಲಸು, ಹೊಂಗೆ ತೆಂಗು
ಬೇವು ಬೇಲಾ ಹೀಗೆ ಹಲವು
ಬಗೆಯ ಜಾತಿ .................

ಇದು ಮೊದಲ ಪಾಪದ ಫಲ
ಬೀಜ ವೃಕ್ಷದ ನೀತಿ ಬಲ್ಲವರು
ಯಾರು ಇಲ್ಲಿ ...............?

Wednesday, December 2, 2009

ನೀ ಬಾರೋ ರವಿತೇಜ

ಮುಸುಕೆಳೆದು ಕಗ್ಗತ್ತಲೆಯ ಸರಿಸಿ
ನೀ ಬಾರೋ ರವಿತೇಜ
ಗಿಡ ಮರದ ಎಲೆಗಂಟಿ
ಸವಿ ಕನಸು ಕಾನುತಿರುವ
ಎಳೆ ಇಬ್ಬನಿಗೆ ಹೊಳಪು ನೀಡಲು,
ಕರಿಮೋಡದ ತೆರೆಯ ಸರಿಸಿ,
ದಿನ ಹುಟ್ಟನ್ನು ಸೂಚಿಸುತ್ತ,
ಮೂಡಣದೀ ನೀ ಹುಟ್ಟಿ ಬಾರೋ ರವಿಯೇ,
ನಿನ್ನ ರಶ್ಮಿಯನ್ನು ಜಗದ್ದುದಕ್ಕೂ ಹರಡುತ್ತಾ,
ಮನು, ಪ್ರಾಣಿ ಸಂಕುಲಕ್ಕೆ
ನಿತ್ಯದ ಕರ್ತವ್ಯದ ಅರಿವು ಮೂಡಿಸಲು,
ಮನುವಿನ ಮನವ ಕಾಡುವ
ಯಾಂತ್ರಿಕತೆಯ ದಿಗಿಲು ಹೊಡಿಸಿ,
ದಿನದ ಹುಟ್ಟು, ಸಾವಿನಂತೆ
ಮನುವಿನಲ್ಲೂ ಹೊಸತನ, ಹೊಸ ಕನಸು,
ಆಸಯಗಳ ಬಲೆ ಎಣೆಯ ಬಾರೋ ರವಿತೇಜ.

Wednesday, April 29, 2009

ಮನದ ಮುಗಿಲು

ಮನದ ಮುಗಿಲಿನಲ್ಲಿ ಮೋಡ ಕಟ್ಟಿದೆ,
ಮೋಡ ಮೋಡ ತಾಕಿ ಧರೆಗೆ ಹನಿ ಉರುಳುವ
ಮುನ್ನ ಬೀಸಿದ ಬಿರುಗಾಳಿಗೆ ಮೋಡ ಚದುರಿದೆ

ಹನಿ ನೀರಿಂದ ತಂಪಾಗಲು ಕಾತರಿಸಿದ್ದ
ನೆಲಕ್ಕಿನ್ನು ಕಾಯುವ ಕಾಯಕ ಮುಗಿದಿಲ್ಲ,
ಒಣಗಿದ ತುಟಿಗಳಿಗೆ ನಿರೀಕ್ಷೆ ಅಷ್ಟೆ!

ಮನದ ನೆಲವಿನ್ನು ಬರಡು ಬರಡು,
ಭಾವವೆಂಬ ಸಸಿಗಳು ಮರುಟಿ ಹೋಗಿದ್ದು, ಮತ್ತೆಂದು
ಕಟ್ಟುವುದು ಮೋಡ, ಮನದ ಮುಗಿಲ ತಣಿಸಲು